ಜಿ.ಆರ್, ಗೋಲ್ಡ್ ಫಿಲಂಸ್ ಲಾಂಛನದಲ್ಲಿ ಜಿ.ರಾಮಚಂದ್ರನ್ ನಿರ್ಮಾಣದ ಕರ್ಣ ಚಿತ್ರವು ಮಾಸಾಂತ್ಯದಲ್ಲಿ ಆರಂಭಗೊಳ್ಳಲಿದೆ. ನಿರ್ಮಾಪಕರು ಈ ಹಿಂದೆ ಹೆಂಡ್ತೀರ ದರ್ಬಾರ್ ಹಾಗೂ ಸೂಪರ್ ಶಾಸ್ತ್ರಿ ಚಿತ್ರ ನಿರ್ಮಾಣ ಮಾಡಿದ್ದರು. ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ - ರವಿರಾಜ್, ಛಾಯಾಗ್ರಹಣ - ದಯಾಳ್ ಓಶೋ, ಕಲೆ-ಕೃಷ್ಣಮಾಚಾರಿ, ಸಂಕಲನ-ದೇವರಾಜ್, ತಾರಾಗಣದಲ್ಲಿ - ಕಿಶೋರ್ , ಹಾರ್ಧಿಕಾ ಶೆಟ್ಟಿ, ಶ್ರೀ ಚಂದ್ರು, ಶೋಭರಾಜ್, ಜಿ.ಆರ್ ಮುಂತಾದವರು ಆಯ್ಕೆಯಾಗಿದ್ದಾರೆ. ಉಳಿದ ತಾರಾಗಣ ಹಾಗೂ ತಾಂತ್ರಿಕ ವರ್ಗದ ಆಯ್ಕೆ ನಡೆಯುತ್ತಿದೆ.